ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ, ತಾಳಮದ್ದಳೆಯ ಅಂದಚಂದ ಕೆಡದಿರಲಿ: ಡಾ ಚಿನ್ನಪ್ಪ ಗೌಡ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 1 , 1
ನವ೦ಬರ್ 10, 2014

ಯಕ್ಷಗಾನ, ತಾಳಮದ್ದಳೆಯ ಅಂದಚಂದ ಕೆಡದಿರಲಿ: ಡಾ ಚಿನ್ನಪ್ಪ ಗೌಡ

ಮಂಗಳೂರು : ಯಕ್ಷಗಾನ ಮತ್ತು ತಾಳಮದ್ದಳೆಯ ಕಥಾ ಭಾಗವನ್ನು ತುಂಡು ತುಂಡು ಮಾಡಿ ಪ್ರದರ್ಶಿಸುವ ಮೂಲಕ ಅದರ ಅಂದಚಂದವನ್ನು ಕೆಡಿಸುವ 'ಪ್ರಯೋಗ'ಗಳಾಗದಿರಲಿ ಎಂದು ಮಂಗಳೂರು ವಿಶ್ವ್ವವಿದ್ಯಾನಿಲಯ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ತಿಳಿಸಿದ್ದಾರೆ.

ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಯಕ್ಷಾಂಗಣ ಮಂಗಳೂರು ಇದರ ಎರಡನೇ ವರ್ಷದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ, ಸರಣಿ ಸಂಸ್ಮರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

ಯಕ್ಷಗಾನಕ್ಕೆ ಬಹುರೂಪಗಳಿವೆ. ಯಕ್ಷಗಾನ ಅಥವಾ ತಾಳಮದ್ದಳೆಯಲ್ಲಿ ಪ್ರಸಂಗದ ಮುಖ್ಯ ಭಾಗವನ್ನಷ್ಟೇ ಪ್ರದರ್ಶಿಸುವ ಪ್ರಯೋಗಗಳು ಈಗ ಹೆಚ್ಚುತ್ತಿವೆ. ಒಮ್ಮೆಗೆ ಪ್ರೇಕ್ಷಕರಿಗೆ ಅಂಥ ಪ್ರದರ್ಶನಗಳು ಇಂಪೆನಿಸಿದರೂ ಮುಂದಿನ ದಿನಗಳಲ್ಲಿ ಅದು ಆತಂಕಗಳಿಗೆ ಕಾರಣವಾಗಬಹುದು. ಮುಖ್ಯ ಭಾಗವನ್ನಷ್ಟೇ ತಿಳಿದುಕೊಂಡು ಇತರ ಭಾಗವನ್ನು ನಿರ್ಲಕ್ಷಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಯಕ್ಷಗಾನವನ್ನು ಯಕ್ಷಗಾನಕ್ಕಾಗಿಯೇ ಆಯೋಜಿಸುವವರ ಒಂದು ವರ್ಗ ಮತ್ತು ಯಕ್ಷಗಾನದ ಮೂಲಕ ಇತರ ಕೆಲಸಗಳನ್ನು ಮಾಡಿಸಿಕೊಳ್ಳುವ ಇನ್ನೊಂದು ವರ್ಗವಿದೆ ಎನ್ನುವ ಉದ್ಯಾವರ ಮಾಧವ ಆಚಾರ್ಯರ ಕಾಳಜಿಯನ್ನು ಉಲ್ಲೇಖಿಸಿದ ಡಾ.ಚಿನ್ನಪ್ಪ ಗೌಡ, ಯಕ್ಷಗಾನಕ್ಕಾಗಿಯೇ ಆದ್ಯತೆ ನೀಡಬೇಕು ಹೊರತು, ಯಕ್ಷಗಾನದ ಮೂಲಕ ಇತರ ಕೆಲಸಗಳಿಗೆ ಆದ್ಯತೆ ಕೊಡಬಾರದು. ಯಕ್ಷಗಾನವನ್ನು ಅದರ ಮೂಲ ಸ್ವರೂಪದಲ್ಲೇ ಅಚ್ಚುಕಟ್ಟಾಗಿ ಕಟ್ಟಿಕೊಡುವ ಕೆಲಸವಾಗಬೇಕೆಂದು ಸಲಹೆ ನೀಡಿದರು.

ಯಕ್ಷಗಾನ ಉಳಿವಿಗಾಗಿ ಪೋಷಕರು, ದಾನಿಗಳು ಆರ್ಥಿಕ ಸಹಾಯ ಮಾಡುತ್ತಾರೆ. ಆದರೆ ಅಲ್ಲಿಗೆ ಅವರ ಜವಾಬ್ದಾರಿ ಮುಗಿಯುವುದಿಲ್ಲ. ತಾವು ನೀಡುತ್ತಿರುವ ದೇಣಿಗೆಯ ವಿನಿಯೋಗವು ಸಮರ್ಪಕವಾಗಿ ವಿನಿಯೋಗವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಹೊಣೆಗಾರಿಕೆಯೂ ಅವರ ಮೇಲಿದೆ ಎಂದು ಹೇಳಿದರು.

ತಾಳಮದ್ದಳೆ ಸಪ್ತಾಹವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಪಾಜೆ ಶೀನಪ್ಪ ರೈ ಉದ್ಘಾಟಿಸಿದರು. ಶೀನಪ್ಪ ರೈ ಅವರನ್ನು ಯಕ್ಷಾಂಗಣದ ವತಿಯಿಂದ ಸನ್ಮಾನಿಸಲಾಯಿತು. ದಿ.ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಸ್ಮರಣಾರ್ಥ ಅಜೆಕಾರು ಕಲಾಭಿಮಾನಿ ಬಳಗ ಪ್ರಕಟಿಸಿರುವ 'ಯಕ್ಷರ ಚೆನ್ನ ' ಕೃತಿ ಬಿಡುಗಡೆ ಮಾಡಿ ಅದರ ಪ್ರತಿಯನ್ನು ಪತ್ನಿ ಹೇಮಲತಾ ಚೆನ್ನಪ್ಪ ಶೆಟ್ಟಿ ಮತ್ತು ಪುತ್ರ ಭೂಷಣ್ ಅವರಿಗೆ ನೀಡಿ ಗೌರವಿಸಲಾಯಿತು.

ಕದ್ರಿ ಶ್ರೀ ಮಂಜುನಾಥ ದೇವಾಲಯದ ಆಡಳಿತ ಮೊಕ್ತೇಸರ ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಜಗನ್ನಾಥ ಚೌಟ,ಅಜೆಕಾರ್ ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ಕಾಲೇಜು ಪ್ರಿನ್ಸಿಪಾಲ್ ಸತ್ಯನಾರಾಯಣ ಮಲ್ಲಿಪಟ್ಣ ಮತ್ತು ಯಕ್ಷಾಂಗಣ ಉಪಾಧ್ಯಕ್ಷ ಎ.ಶಿವಾನಂದ ಕರ್ಕೇರ ಉಪಸ್ಥಿತರಿದ್ದರು. ಯಕ್ಷಾಂಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರುಕ್ಮಾಂಗದ ತಾಳಮದ್ದಳೆ ಕಾರ್ಯಕ್ರಮ ಜರುಗಿತು. ನ.10ರಂದು ಸಂಜೆ 5 ಗಂಟೆಯಿಂದ ವಳವೂರು ರಾಮಣ್ಣ ರೈ ಸಂಸ್ಮರಣೆ ಅಂಗವಾಗಿ 'ಬಲಿ' ತುಳು ತಾಳಮದ್ದಳೆ ಜರುಗಲಿದೆ.

ಯಕ್ಷ ಕಲಾವಿದರ ಎಕ್ಸ್‌ಚೇಂಜ್ !: ಶೈಕ್ಷಣಿಕ ವಲಯದಲ್ಲಿ ಕಲಾವಿದರ ವಿನಿಮಯ ಕಾರ್ಯಕ್ರಮ (ಎಕ್ಸ್‌ಚೇಂಜ್ ಪ್ರೋಗ್ರ್ಯಾಮ್) ಇರುವಂತೆ ಯಕ್ಷಗಾನದಲ್ಲೂ ಅವಕಾಶವಿರಬೇಕು. ಇದರಿಂದ ಕಲಾವಿದರಿಗೆ ಒಂದೇ ಮೇಳದಲ್ಲಿ ಕಲಾ ಸೇವೆ ಮಾಡುವ ಬದಲು ನಮ್ಮಲ್ಲಿರುವ ಇತರ 30-40 ಮೇಳಗಳಲ್ಲೂ ಅವಕಾಶ ಸಿಗುತ್ತದೆ. ಅಲ್ಲಿ ಅವರಿಗೆ ಹೆಚ್ಚು ಹೆಸರು ಬರುತ್ತದೆ ಎನ್ನುವ ಸಲಹೆಯನ್ನು ಡಾ.ಚಿನ್ನಪ್ಪ ಗೌಡ ನೀಡಿದರು.



ಕೃಪೆ : http://www.vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ